Saturday, 27 June 2009
ದೇವರನ್ನು ಕುರಿತು - ೨
[ಬಹಳ ದಿನಗಳ ಕಾಲ ಪೋಸ್ಟ್ ಮಾಡಲು ಸಮಯ ಸಿಕ್ಕಿರಲಿಲ್ಲ. ಈ ದಿನ ಮಾಡುತ್ತಿದ್ದೇನೆ. ಇನ್ನು ಮುಂದೆ ಸಕಾಲಕ್ಕೆ update ಮಾಡುತ್ತೇನೆಂದು ಭಾವಿಸಿದ್ದೇನೆ. ನೋಡೋಣ ಕಾಲ ಏನು ಮಾಡುತ್ತೆ ಅಂತ.]
ಈಗ ದೇವರನ್ನು ಕುರಿತಾಗಿ ಬರೆದ ಮತ್ತಷ್ಟು ವಚನಗಳು ನೋಡೋಣ.
ಕ್ಷೀರದೊಳು ಘೃತವಿರಲು| ನೀರಿನಲ್ಲಿ ಸಿಲ್ಕಿಹುದು|
ಆರಿಗೆ ತೋರದಂತೆ ತನ್ನೊಳಗೆ|
ಸಾರಿಹನು ಶಿವನು ಸರ್ವಜ್ಞ||
- ಹಾಲಿನಲ್ಲಿ ಹೇಗೆ ತುಪ್ಪವು, ನೀರಿನಲ್ಲಿ ಕಸವು ಇದ್ದರೂ ಬರಿಗಣ್ಣಿಕೆ ಕಾಣಿಸುವುದಿಲ್ಲವೋ ಹಾಗೆ ದೇವರು ಮಾನವರ ಶರೀರದಲ್ಲಿ ಇದ್ದರೂ ನಮಗೆ ಕಾಣಿಸುವುದಿಲ್ಲ.
ಮನದಲ್ಲಿ ನೆನೆವಿರಲು| ತನುವೊಂದು ಮಠವಕ್ಕು|
ಮನಹೋಗಿ ಹಲವ ನೆನೆದಿಹರೆ ಅದು ಹಾಳು|
ಮನೆಯೆಂದು ತಿಳಿಯೋ ಸರ್ವಜ್ಞ||
- ಇದರಲ್ಲಿ ಹೇಳುವ ವಿಷಯ ಏನೆಂದರೆ, ಮನಸ್ಸಿನಲ್ಲಿ ದೇವರನ್ನು ನೆನೆಯಿರಿ ಸಾಕು, ಆಗ ನಮ್ಮ ದೇಹವೇ ಭಗವಂತ ನೆಲೆಸಿರುವ ಗುಡಿಯಾಗುವುದು. ಏಕಾಗ್ರತೆಯಿಲ್ಲದ ದೇವರನ್ನು ನೆನೆದರೆ ಆಗ ನಮ್ಮ ದೇಹವು ಗುಡಿಯಾಗಿರುವುದಿಲ್ಲ ಬದಲಿಗೆ ಹಾಳು ಬಿದ್ದ ಮನೆಯಾಗಿರುತ್ತದೆ.
ದೇಹ ದೇವಾಲಯವು| ಜೀವವೇ ಶಿವಲಿಂಗ|
ಬಾಹ್ಯಾಂಗಳಳಿದು ಭಜಿಪಂಗೆ ಮುಕ್ತಿ ಸಂ|
ದೇಹವಿಲ್ಲೆಂದ ಸರ್ವಜ್ಞ||
- ನನ್ನಲ್ಲೇ ದೇವರಿದ್ದಾರೆ, ಬೇರೆಲ್ಲೂ ಹುಡುಕುವುದು ಬೇಡ. ಅವನನ್ನು ನೆನೆದರೆ ಮುಕ್ತಿ ಸಿಗುವುದು ಎಂದು ಸರ್ವಜ್ಞ ನುಡಿದಿದ್ದಾನೆ. ಬಸವಣ್ಣನವರ ವಚನ: "ಎನ್ನ ಕಾಲೆ ಕಂಬ, ದೇಹವೆ ದೇಗುಲ, ಶಿರವೇ ಹೊನ್ನ ಕಳಶ..."ಕೂಡ ಇದನ್ನೇ ಹೇಳುತ್ತದೆ.
Subscribe to:
Posts (Atom)